March 22, 2023

ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..

Share News

ಹೌದು ವೀಕ್ಷಕರೇ 2022.2023 ನೇ ಸಾಲಿನ ವಾರ್ಷಿಕ ಮಳೆಯಿಂದ ಈ ಕಳೆದ ಎರಡು ಮೂರು ತಿಂಗಳಿಂದ ರಾಜ್ಯದಲ್ಲಿ ಅತಿಯಾದ ಪ್ರಮಾಣದಲ್ಲಿ ಮಳೆಯಾಗಿದ್ದು ಕರ್ನಾಟಕದ ಸುಮಾರು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ರೈತರು ತುಂಬಲಾರದ ನಷ್ಟ ಅನುಭವಿಸಿದ್ದಾರೆ.

ಅದರಂತೆ ಕರ್ನಾಟಕ ಸರ್ಕಾರವು ಕಳೆದ ಒಂದರಿಂದ ಎರಡು ಕಳೆದ ತಿಂಗಳಿಂದ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸುತ್ತೋಲೆಯನ್ನು ಹೊರಡಿಸಿತು ಅದೇ ರೀತಿ ರಾಜ್ಯದ ಎಲ್ಲಾ ರೈತರು ಬೆಳೆ ಪರಿಹಾರಕ್ಕೆ ಅರ್ಜಿಯನ್ನು ಫೋಟೋಗಳ ಸಮೇತ ತಮ್ಮ ತಮ್ಮ ತಾಲೂಕ ಕಚೇರಿಗಳಲ್ಲಿ ಅರ್ಜಿಯನ್ನು ಸಲ್ಲಿಸಿದರು

ಕಳೆದ ಎರಡು ಮೂರು ದಿನಗಳ ಹಿಂದೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಸದ್ಯದಲ್ಲಿ ರಾಜ್ಯದ ರೈತರಿಗೆ ಬೆಳೆ ಪರಿಹಾರ ಹಣ ಜಮಾ ಮಾಡಲಾಗುವುದು ಎಂದು ಭರವಸೆ ಕೊಟ್ಟಿದ್ದರು ಮತ್ತು ಬೆಳೆ ಪರಿಹಾರ 116 ಕೋಟಿ ರೂಗಳನ್ನು ನೀಡುವುದಾಗಿ ಹೇಳಿದ್ದರು

ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿ ಪ್ರತಿ ಹೆಕ್ಟರಿಗೆ ಒಣ ಭೂಮಿಗೆ 13500 ನೀರಾವರಿಗೆ 25000 ಬಹು ವಾರ್ಷಿಕ ಬೆಳೆಗೆ 28,000 ರೋಗವನ್ನು ನೀಡಲಾಗುವುದೆಂದು ತಿಳಿಸಿದರು

ಮಳೆಯ ಆಶ್ರಿತ ಬೆಳೆ ಹಾನಿಗೆ ಪ್ರತಿಹೆಟ್ಟರಿಗೆ ಪ್ರತಿಹೆಟ್ಟೇರಿಗೆ ಎಂ ಡಿ ಆರ್ ಎಫ್ ಅನುಸಾರ 10800 ರೂಗಳು ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ನೀಡಿ ಒಟ್ಟು 13500 ಗಳನ್ನು ನೀಡಲಾಗುವುದು.

https://landrecords.karnataka.gov.in/PariharaPayment/

ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಎಂದು ತಿಳಿಯಲು ಈ ಮೇಲೆ ಕೊಟ್ಟಿರುವ ಲಿಂಕನ್ನು ಉಪಯೋಗಿಸಿಕೊಂಡು ಚೆಕ್ ಮಾಡಿಕೊಳ್ಳಬಹುದು.

ಈ ಲೇಖನ ನಿಮಗೆ ಇಷ್ಟವಾಗಿದ್ದಲ್ಲಿ ಮೇಲೆ ಮತ್ತೆ ಕೆಳಗೆ ಕೊಟ್ಟಿರುವ ಸಾಮಾಜಿಕ ಜಾಲತಾಣಗಳ ಲಿಂಕನ್ನು ಉಪಯೋಗಿಸಿಕೊಂಡು ನಿಮ್ಮ ನಿಮ್ಮ ರೈತ ಬಾಂಧವರಿಗೆ ಶೇರ್ ಮಾಡೋದಕ್ಕೆ ಸಹಾಯ ಮಾಡಬಹುದು..


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

Leave a Reply

Your email address will not be published. Required fields are marked *